ಬಡವ

ಬಗೆ ಬಗೆಯ ಬಯಕೆಗಳು
ಕಾಡದೇ ಇರಲಿಲ್ಲ
ಆದರೂ ನೇಚ್ಯ ನೀನೆಂದು
ಆಸೆ ಭರಣಿಗೆ ಮುಚ್ಚಳವ ಬಿಗಿದೆ

ಗೋರಿ ವಾಕ್ಯದ ಕೆತ್ತುವುದೆಂತು
ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ
ಸದ್ದಿಲ್ಲದೇ ಆವಾಹನ
ಹರೆಯದಲಿ ಹುಡುಗತನದಲಿ
ಹಾದಿ ವಿಪ್ಲವಗಳ ಮರೆತು
ಸೇತುವೆಯಾಗ ಬಯಸಿದೆ
ಒಂಟಿಗಂಭವಾಗುವುದ ಬಿಟ್ಟು

ಆದರೆ ಅತ್ತ ದರಿ ಇತ್ತ ಪುಲಿ
ಸ್ಥಿತ್ಯಂತರ ಸಾಧ್ಯವಾಗದೇ ತ್ರಿಶಂಕುವಾದೆ
ಸವಾಲು ಹಾಕದೆ ಸದ್ದಿಲ್ಲದೇ
ಸರಿಯಬಿಟ್ಟೆ

ಹದಿನಾರಾಣೆಯ ನ್ಯಾಯ
ಹುಡುಕಿದೆ, ಅಸಂಭವ ಎನಿಸಿ
ಸರಳ ರೇಖೆಯಾಗಿಬಿಟ್ಟೆ,
ಇನ್ನೊಂದನ್ನು ಸಂಧಿಸುವ
ಆಸೆ – ರಂಗೋಲಿಯಡಿಯಿಟ್ಟು

ಹಸಿದ ನಿನ್ನ ತೋಳುಗಳಿಗೆಲ್ಲಿ
ಮೇಲೆತ್ತುವ ದರ್ಪ
ಎತ್ತಿಕೊಂಡರೆ ಜೋಕೆ
ಸುತ್ತಿಕೊಳ್ಳಲು ಕಾದಿದೆ
ನಂಜೂರುವ ಸರ್ಪ


Previous post ಪ್ರೀತಿ
Next post ಆಸನಗಳು

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys